ರಾಜಕೀಯರಾಜ್ಯ

ಸಿಎಂ ಕುರ್ಚಿಗೆ ಮಹಾ ಟ್ವಿಸ್ಟ್: ಸಿದ್ದರಾಮಯ್ಯ ಹೈಕಮಾಂಡ್ ಮುಂದೆ ಉತ್ತರಾಧಿಕಾರಿ ಹೆಸರೇ ಹೇಳಿದ್ರಾ?

ಕರ್ನಾಟಕ ರಾಜಕೀಯ ಈಗ ಮತ್ತೆ ಕಕ್ಕಾಬಿಕ್ಕಾಗಿದೆ.
ಇಷ್ಟು ದಿನ “ಸಿದ್ದರಾಮಯ್ಯ 5 ವರ್ಷ ಸಂಪೂರ್ಣ ಕಾಲಾವಧಿ ಪೂರೈಸುತ್ತಾರೆ, ರಾಜೀನಾಮೆ ಎಂಬ ಪ್ರಶ್ನೆಯೇ ಇಲ್ಲ” ಎಂದು ಹೇಳುತ್ತಿದ್ದ ಕಾಂಗ್ರೆಸ್ ಶಿಬಿರದಲ್ಲಿ ಈಗ ಅಚ್ಚರಿಯ ಸದ್ದು.

ಡೆಕ್ಕಾನ್ ಹೆರಾಲ್ಡ್ ಸಂಸ್ಥೆಯ ವರದಿ ಪ್ರಕಾರ,
ಸಿದ್ದರಾಮಯ್ಯ ಅವರು ಕಾಂಗ್ರೆಸ್ ಹೈಕಮಾಂಡ್‌ನ ಟಾಪ್ ನಾಯಕನೊಬ್ಬರ ಜೊತೆ ಮಾತನಾಡುವಾಗ, ತಮ್ಮ ತ್ಯಾಗದ ಸಿದ್ಧತೆ, ಮತ್ತು ಮುಂದಿನ ಸಿಎಂ ಯಾರು ಆಗಬೇಕು? ಎಂಬುದನ್ನು ನೇರವಾಗಿ ಹೇಳಿದ್ದಾರಂತೆ!

ಇಲ್ಲಿ ಮುಖ್ಯವಾದ ವಿಷಯ ಏನೆಂದರೆ—
ಸಿದ್ದರಾಮಯ್ಯ ಸೂಚಿಸಿದ ಹೆಸರು
❌ ಡಿಕೆ ಶಿವಕುಮಾರ್ ಅಲ್ಲ,
❌ ಸತೀಶ್ ಜಾರಕಿಹೊಳಿ ಕೂಡ ಅಲ್ಲ!

ಹಾಗಾದರೆ…
ಆ ಪ್ರಭಾವಿ ನಾಯಕ ಯಾರು?
ಸಿದ್ದರಾಮಯ್ಯ ಯಾಕೆ ಹಠಾತ್ ರಾಜೀನಾಮೆ ಸನ್ನೇತೆ ಕೊಟ್ಟರು?
ಕಾಂಗ್ರೆಸ್ ಒಳಗಿನ ಪವರ್ ಸ್ಟ್ರಗಲ್ ಈಗ ಯಾವ ದಿಕ್ಕಿಗೆ ತಿರುಗುತ್ತಿದೆ?

ರಾಜಕೀಯ ಹಿನ್ನಲೆ: ಬದಲಾಗುತ್ತಿರುವ ಸಮೀಕರಣಗಳು

ಕಳೆದ ಕೆಲವು ವಾರಗಳಿಂದ ಕಾಂಗ್ರೆಸ್ ಶಿಬಿರದ ಒಳಗಡೆ ‘ಕುರ್ಚಿ ಕದನ’ ದಿನೇ ದಿನೇ ತೀವ್ರವಾಗುತ್ತಲೇ ಬಂದಿದೆ.
ಡಿಕೆಶಿ ಗುಂಪು — “ಪವರ್ ಶೇರ್‌ಿಂಗ್ ಒಪ್ಪಂದ ಇದ್ದರು, ಈಗ ಸಿಎಂ ಬದಲಾವಣೆ ಆಗಬೇಕು” ಎಂಬ ಒತ್ತಡ.
ಸಿದ್ದು ಗ್ರೂಪ್ — “ಐದು ವರ್ಷವೂ ನನಗೆ, ಬದಲಾವಣೆ ಬೇಡ” ಎಂಬ ನಿಲುವು.

ಈ ನಡುವೆ ಸಿದ್ದರಾಮಯ್ಯ ಅವರಿಂದಲೇ ‘ತ್ಯಾಗದ ಮಾತು’ ಹೊರಬಂದಿರುವುದು ಎಲ್ಲರನ್ನೂ ಬೆಚ್ಚಿಬೀಳಿಸಿದೆ.

ಹೈಕಮಾಂಡ್ ಮುಂದೆ ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾದ ಮಾತು

ವರದಿ ಪ್ರಕಾರ ಸಿದ್ದರಾಮಯ್ಯ ಹೇಳಿರುವ ಮಾತು:
“ಅಗತ್ಯವಿದ್ದರೆ ನಾನು ಹಿಂದೆ ಸರಿಯಲು ಸಿದ್ಧ. ಆದರೆ ನನ್ನ ನಂತರ ಈ ನಾಯಕನಿಗೆ ಸಿಎಂ ಪಟ್ಟ ನೀಡಿದರೆ, ನಾನು ಸಂಪೂರ್ಣ ಬೆಂಬಲಿಸುತ್ತೇನೆ.”

ಈ ಮಾತು ಹೊರಬಿದ್ದ ತಕ್ಷಣ ಹೈಕಮಾಂಡ್‌ನಲ್ಲಿ ಚರ್ಚೆಗಳು ಜೋರಾಗಿವೆ.
ರಾಜ್ಯದಲ್ಲಿ ಪಕ್ಷದ ಭವಿಷ್ಯಕ್ಕೆ ಇದು ಹೇಗೆ ಪರಿಣಾಮ ಬೀರುತ್ತದೆ ಎನ್ನುವುದರ ಮೇಲೂ ತೀವ್ರವಾಗಿ ಮೌಲ್ಯಮಾಪನ ನಡೆಯುತ್ತಿದೆ.

ಸಿದ್ದರಾಮಯ್ಯ ಸೂಚಿಸಿದ ನಾಯಕ ಯಾರು?

ಡೆಕ್ಕಾನ್ ಹೆರಾಲ್ಡ್ ವರದಿ ನಿಖರ ಹೆಸರು ಬಹಿರಂಗಪಡಿಸದಿದ್ದರೂ, ಕಾಂಗ್ರೆಸ್ ಒಳಮತ ಪ್ರಕಾರ —

  • ಅವರು ಹೇಳಿದ್ದು ನಿರ್ವಹಣಾ ಸಾಮರ್ಥ್ಯ ಇರುವ, ಪಕ್ಷದ ಹಿರಿಯ, ತಟಸ್ಥ, ಎಲ್ಲ ಗುಂಪುಗಳಿಗೂ ಸ್ವೀಕಾರಾರ್ಹ ವ್ಯಕ್ತಿಯಾಗಿರಬಹುದೆಂದು ಊಹಿಸಲಾಗಿದೆ.
  • ಈ ನಾಯಕನ ಹೆಸರು ಹೊರಬಂದರೆ ರಾಜ್ಯ ರಾಜಕೀಯವೇ ಒಂದೇ ಕ್ಷಣದಲ್ಲಿ ತಲೆಕೆಳಗೂ ಆಗಲಿದೆ.

ಇದು ಡಿಕೆಶಿಗೆ ದೊಡ್ಡ ರಾಜಕೀಯ ಶಾಕ್ ಆಗುವ ಸಾಧ್ಯತೆ ಇದೆ ಎಂದು ವಲಯದ ಮಾತು.

ರಾಜಕಾರಣದಲ್ಲಿ ಸದ್ದು: DKShi ಶಿಬಿರ ಗಾಬರಿ?

ಡಿಕೆಶಿ ಸಿಎಂ ಆಗುವುದೇ ನಿಶ್ಚಿತ ಎಂದು ಕೆಲವರು ಭಾವಿಸಿದ್ದರೆ, ಇದೀಗ ಸಿದ್ದರಾಮಯ್ಯ ಅವರು “ಡಿಕೆಶಿ ಅಲ್ಲ” ಎಂದು ಹೇಳಿದರೆ, ಪಾರ್ಟಿ ಒಳಗಡೆ ದೊಡ್ಡ ಗಲಾಟೆ ಬೆಳೆಯುವ ಸೂಚನೆ ಇದೆ.

ಇದರಿಂದ

  • DKShi ಶಿಬಿರ ಅಸಮಾಧಾನ
  • ಸಿದ್ದು ಶಿಬಿರ ಪುನಃ ಬಲ
  • ಹೈಕಮಾಂಡ್ ಸಂಪೂರ್ಣ ಎಚ್ಚರ

ಎಂಬ ಸ್ಥಿತಿಯಾಗಿದೆ.

ಮುಂದೇನು?

► ಸಿದ್ದರಾಮಯ್ಯ ತ್ಯಾಗದ ಮಾತು ಅಧಿಕೃತವಾಗಿ ಹೊರಬರುತ್ತದೆಯಾ?
► ಹೈಕಮಾಂಡ್ ಯಾವ ನಾಯಕನನ್ನು ‘ಕಾಂಪ್ರಮೈಸ್ ಸಿಎಂ’ ಆಗಿ ಆಯ್ಕೆ ಮಾಡುತ್ತದೆ?
► DKShi ಒಪ್ಪುತ್ತಾರಾ?
► ಸರ್ಕಾರದ ಸ್ಥಿರತೆ ಹೇಗೆ?

ಈ ಪ್ರಶ್ನೆಗಳು ಮುಂದಿನ ಕೆಲವು ದಿನಗಳಲ್ಲಿ ದೊಡ್ಡ ಚರ್ಚೆಯಾಗಿ ಪರಿಣಮಿಸಲಿವೆ.

Related posts

ನಾಲ್ವರು–ಐದು ಮಂದಿ ಮಾತ್ರಕ್ಕೆ ತಿಳಿದ ರಹಸ್ಯ ಒಪ್ಪಂದವೇ ಅಧಿಕಾರ ಹಂಚಿಕೆ!” – ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ

admin@kpnnews.com

ಡಿಸೆಂಬರ್ 9ರಂದು BJP ಯಿಂದ ಸುವರ್ಣ ವಿಧಾನಸೌಧ ಮುತ್ತಿಗೆ: ಸರ್ಕಾರದ ವೈಫಲ್ಯಗಳ ವಿರುದ್ಧ ಭಾರೀ ಪ್ರತಿಭಟನೆಗೆ ಸಜ್ಜು

digitalbharathi24@gmail.com

ಕರ್ನಾಟಕಕ್ಕೆ ಬಿಡದ ಮಳೆ ಕಾಟ: ಇನ್ನೂ 5 ದಿನ ಮಳೆ ಮುಂದುವರಿಕೆ, 7 ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್‌’ ಘೋಷಣೆ!

Latest news
ಬೆಳಗಾವಿ ಚಳಿಗಾಲದ ಅಧಿವೇಶನ: 10 ದಿನಗಳಲ್ಲಿ 23 ವಿಧೇಯಕಗಳಿಗೆ ಅಂಗೀಕಾರ ರಾಜ್ಯಸಭೆಯಲ್ಲಿ ಮಧ್ಯರಾತ್ರಿ ಜಿ ರಾಮ್‌ ಜಿ ಮಸೂದೆ ಅಂಗೀಕಾರ; ವಿಪಕ್ಷಗಳ ತೀವ್ರ ಆಕ್ರೋಶ ಟಿ-20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ; ಶುಭ್‌ಮನ್ ಗಿಲ್ ಹೊರಗೆ, ಇಶಾನ್ ಕಿಶಾನ್‌ಗೆ ಕಂಬ್ಯಾಕ್ ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ಮುಂದುವರಿದ ಶೀತದಲೆಯ ಅಬ್ಬರ; 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, 10 ಜಿಲ್ಲೆಗಳಿಗೆ... ಬೇಡಿಕೆ ಈಡೇರಿದೆ, ನನ್ನ–ಸಿಎಂ ನಡುವೆ ಒಪ್ಪಂದವಾಗಿದೆ; ಹೈಕಮಾಂಡ್ ಬೆಂಬಲದಿಂದಲೇ ಅವರು ಮುಖ್ಯಮಂತ್ರಿ: ಡಿ.ಕೆ. ಶಿವಕುಮಾರ... ಬೇರೆ ಧರ್ಮದವನನ್ನು ಮದುವೆಯಾದರೆ ಮಗಳಿಗೆ ತಂದೆಯ ಆಸ್ತಿಯಲ್ಲಿ ಹಕ್ಕಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಬೆಳಗಾವಿ ಚಳಿಗಾಲ ಅಧಿವೇಶನ: ಉತ್ತರ–ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕೇಂದ್ರದ ನೆರವು ಕೋರಿ ನಿರ್ಣಯಗಳಿಗೆ ವಿಧಾನಸಭೆಯ ಸರ... ಮೋದಿ ಓಮನ್ ಭೇಟಿ… ಪಾಕ್–ಚೀನಾ ಏಕೆ ಪತರಗುಟ್ಟಿವೆ? ಹಿಜಾಬ್ ವಿಚಾರ ತೀವ್ರಗೊಂಡ ಬೆನ್ನಲ್ಲೇ ಸಿಎಂ ನಿತೀಶ್ ಕುಮಾರ್ ವಿರುದ್ಧ ದೂರು: ಬೆದರಿಕೆ ಎಚ್ಚರಿಕೆಯಿಂದ ಭದ್ರತೆ ಮತ್ತಷ್... ‘ಕೈ’ ಕಮಾಂಡ್‌ ತೃಪ್ತಿಗೆ ರಾಜ್ಯದ ಖಜಾನೆ ಖಾಲಿ ಮಾಡುತ್ತಿದ್ದಾರೆ’: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿ.ವೈ. ವಿಜಯೇಂದ್ರ ...